ಚಿರನಿದ್ರೆಗೆ ಜಾರಿದರೂ, ಚಿರಂಜೀವಿಯಾದವರು,
ಯಾರವರು? ಯಾರವರು?
ಕಂಠಸಿರಿಯಿಂದ, ಕಲಾ ನೈಪುಣ್ಯತೆಯಿಂದ,
ಕರ್ಣ ಕಣ್ಗಳಿಗಿoಪನು ನೀಡಿ, ಮನಸೂರೆಗೈದವರು,
ಯಾರವರು? ಯಾರವರು?
ಒಬ್ಬರೋ ಸಿಂಹ ನಡಿಗೆಯವರು, ಕೋಟಿಗೊಬ್ಬರು ಇವರು,
ಸಾಹಸಸಿಂಹರೆನಿಸಿಕೊಂಡವರು, ಕೋಗಿಲೆ ಕಂಠದವರು,
ಅಜಾತಶತ್ರುವಾಗಿ, ಆಪ್ತ ಮಿತ್ರ, ಆಪ್ತರಕ್ಷಕರಾದವರು,
ಅವರೇ ನಮ್ಮ ಶ್ರೀ ವಿಷ್ನುವರ್ಧನರು ||ಚಿರನಿದ್ರೆಗೆ ಜಾರಿದರೂ||
ಇನ್ನೊಬ್ಬರೋ ನಟನಾ ಸಾಮ್ರಾಟರು, ಹೃದಯಶ್ರೀಮಂತರು,
ಸಜ್ಜನ ಸ್ವರೂಪಿಗಳು, ನಿರ್ಮಲ ನುಡಿಯವರು,
ಶಾಂತ ಸ್ವಭಾವದವರು, ಚಾಮಯ್ಯ ಮಾಸ್ತರರಾದವರು,
ಅವರೇ ನಮ್ಮ ಶ್ರೀ ಕೆ. ಎಸ್. ಅಶ್ವತ್ಥರವರು ||ಚಿರನಿದ್ರೆಗೆ ಜಾರಿದರೂ||
ಮತ್ತೊಬ್ಬರೋ, ಕಂಚಿನಾ ಕಂಠದವರು, ಸಂಗೀತ ಸಾಮ್ರಾಟರು,
ನವ ಯುಗದ ಶಿಶುನಾಳರೆನಿಸಿಕೊಂಡವರು,
ಗಾನಗಂಗೆಗೆ ರಾಗ ದಂಡೆಯ ತೋರಿ, ಸಂಗೀತ ಸಾಗರಕೆ ಅರ್ಪಿಸಿದವರು,
ಅವರೇ ನಮ್ಮ ಶ್ರೀ ಸಿ. ಅಶ್ವತ್ಥರವರು ||ಚಿರನಿದ್ರೆಗೆ ಜಾರಿದರೂ||
No comments:
Post a Comment